ಸವದತ್ತಿ ಪಟ್ಟಣದಲ್ಲಿ ಶನಿವಾರ ಸಂಭ್ರಮದಿಂದ ಗಣೇಶನನ್ನು ಬರಮಾಡಿಕೊಳ್ಳಲಾಯಿತು
ಸವದತ್ತಿ ಪಟ್ಟಣದಲ್ಲಿ ಪ್ರತಿವರ್ಷದಂತೆ
ತಮ್ಮ ಮನೆ ಹಾಗೂ ವಿವಿಧ ಬಡಾವಣೆಗಳ ಸಾರ್ವಜನಿಕ ಮಂಟಪಗಳಲ್ಲಿ ಪ್ರತಿಷ್ಠಾಪಿಸಲು ಜನರು ಗಣಪನ ಮೂರ್ತಿಗಳನ್ನು ಹೊತ್ತು ತಂದರು. ಪಟಾಕಿಗಳನ್ನು ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಎಲ್ಲರಿಗೂ ಒಳಿತಾಗಲೆಂದು ಗಣೇಶನಲ್ಲಿ ಪೂಜಿಸಿದರು. ಭಜನೆ, ಕೋಲಾಟದ ಗಮನಸೆಳೆದರು.
ಇತ್ತ ಸವದತ್ತಿ ಪೊಲೀಸ್ ಠಾಣೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಯಿತು. ಅಧಿಕಾರಿಗಳು ಹಾಗೂ ಸಿಬ್ಬಂದಿ ಒಂದೇ ತರಹದ ಬಟ್ಟೆ ಧರಿಸಿದ್ದರು.
ಬಸವೇಶ್ವರ ದೇವಸ್ಥಾನದಿಂದ ಖಾದಿ ಗ್ರಾಮೋದ್ಯೋಗ, ಎಸ್ಎಲ್ಓ ಕ್ರಾಸ್ ಮಾರ್ಗವಾಗಿ ಪೊಲೀಸ್ ಠಾಣೆಯವರೆಗೆ ನಡೆದ ಮೆರವಣಿಯಲ್ಲಿ ಪೊಲೀಸ್ ಅಧಿಕಾರಿಗಳು ಕುಣಿದು ಕುಪ್ಪಳಿಸಿದರು.
ಸಿಪಿಐ ಧರ್ಮಾಕರ ಧರ್ಮಟ್ಟಿ, ಜನರಿಗೆ ಶುಭಕೋರಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಹಕರಿಸುವಂತೆ ಜನರಲ್ಲಿ ಮನವಿ ಮಾಡಿದರು.
ಈ ವೇಳೆ ಪಿಎಸ್ಐ ಆನಂದ ಕ್ಯಾರಕಟ್ಟಿ,
ಸಿಬಿ ಪಿಐಎಸ್ ಲಕ್ಷ್ಮಣ ಗೌಡಿ,ಎಡಿಶನ್ ಪಿಎಸ್ಐ ಬಿ.ಎಮ್.ಪಾಟೀಲ,ಎಎಸ್ಐ ಬಿ.ಆರ್.ಸಣಮಾಳಗಿ,
ಮಂಜುನಾಥ ಹಾದಿಮನಿ,ಮಂಜುನಾಥ ನಡುವಿನಮನಿ,
ಎಸ್.ಎಮ್. ಮಂಗಣ್ಣವರ,ಎಚ್.ಬಿ.ಮಳಲಿ,ಜೆ.ಆರ್.ಗಿಡಪ್ಪನವರ,
ಎನ್.ವಿ.ಕರಡಿ,ಎಸ್.ಎಮ್.ಬೆಟಗೇರಿ, ವಿ.ಎಮ್.ಮೇಟಿ
ಪಿ.ಆರ್.ಹೊರಮನಿ,ಉದಪ್ಪ ಪೂಜೇರ, ಸವಿತಾ ಹೊಸೂರ,ಸರಸ್ವತಿ ಹಂಪಣ್ಣವರ,ಉಪಸ್ಥಿತರಿದ್ದರು.
